ದೀನರಿಗೆ ದಿಕ್ಕಾದ ದಿಗ್ಗಜೆ : ಸಾವಿತ್ರಿಬಾಯಿ ಫುಲೆ
ಭಾರತದ ಮೊದಲ ಶಿಕ್ಷಕಿ ಮತ್ತು ಸಮಾಜ ಸುಧಾರಕಿ ಸಾವಿತ್ರಿಬಾಯಿ ಫುಲೆ ಅವರ ಕಿರು ಪರಿಚಯ
ಭಾರತದ ಮೊದಲ ಶಿಕ್ಷಕಿ ಮತ್ತು ಸಮಾಜ ಸುಧಾರಕಿ ಸಾವಿತ್ರಿಬಾಯಿ ಫುಲೆ ಅವರ ಕಿರು ಪರಿಚಯ
ಸಾವಿತ್ರಿಬಾಯಿ ಅವರ ದಿವ್ಯ ಸ್ಮರಣೆಯಲ್ಲಿ ಅವರ ಈ ಜನ್ಮದಿನಾಂಕವನ್ನೇ “ಶಿಕ್ಷಕರ ದಿನ-ಅಕ್ಷರದ ದಿನ” ಎಂದು ನ್ಯಾಯಸಮ್ಮತವಾಗಿ, ಆದರಪೂರ್ವಕವಾಗಿ ದೇಶಾದ್ಯಂತ ಮಾನ್ಯಮಾಡಬೇಕು. ಇಡೀ ಭಾರತವು, “ಆ ಮಾತಾಯಿ ನಮ್ಮ ನಡುವೆ ಎದ್ದು ಬಂದು, ಬಿದ್ದು ಬೇನೆಯಲ್ಲಿದ್ದ ಲೆಕ್ಕವಿಲ್ಲದಷ್ಟು ಮಂದಿ ಎದ್ದುಬರುವಂತೆ ಮಾಡಿದಳಲ್ಲ!" ಎಂಬ ಅಭಿಮಾನದಿಂದ, ಧನ್ಯತೆಯಿಂದ ಅವರನ್ನು ಈವೊತ್ತು ನೆನಪಿಸಿಕೊಳ್ಳಬೇಕು.
ಎಲ್ಲರಿಗೂ ಕೃಷ್ಣಮಾಸ ಶುಭ-ಶೋಭೆಗಳನ್ನು ತರಲಿ!
ಶ್ರೀ ಕೃಷ್ಣ ಪರಮಾತ್ಮ ನರನಿಗೆ ಗೀತೋಪದೇಶ ಮಾಡಿದ ತಿಂಗಳು. ಅಂದರೆ, ಗೀತಾ ಜಯಂತಿಯ ತಿಂಗಳು. ಗೀತೆಯನ್ನು ಪಠಿಸುತ್ತ, ಮನನಿಸುತ್ತ, ಅರ್ಜುನನ ನಿಮಿತ್ತ ಮನುಜರಿಗೆ ದೊರಕಿದ ಕೃಷ್ಣ ಎನ್ನುವ ಜ್ಞಾನಾಮೃತವನ್ನು ಸವಿಯುತ್ತ ಕೃಷ್ಣಮಾಸವಿಡಿ ನಲಿಯೋಣ
ಎಲ್ಲ ಶಿಕ಼ಕರೂ ಹೀಗಲ್ಲ ಅಂತ ಸಮಸ್ಯೆಯನ್ನೆ ತೊಡೆದು ಹಾಕುವುದು ಸರಿ ಅಲ್ಲ. ಶೈಕ್ಷಣಿಕ ಕೊರತೆ, ಅವಕಾಶ ವಂಚನೆ, ಅನ್ಯಾಯ, ಅಥವ ಅನಾಹುತ ಒಂದೇ ಮಗುವಿಗೆ ಆದರೂ ಅದು ಸಮಾಜದ ಸೋಲು.
ಕನ್ನಡಿಗರು ಅಭಿಮಾನಿಗಳೆ? ಸುಮ್ಮನೆ "ಅಡ್ಜಸ್ಟ್" ಮಾಡಿಕೊಳ್ಳುತ್ತ ತಮ್ಮತನವನ್ನೆ ಕಳೆದುಕೊಳ್ಳುವವರೆ?
ಸಂಸ್ಕೃತ ಕನ್ನಡದ ಅಮ್ಮನೋ ಅಜ್ಜಿಯೋ?! (-:
ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳು
ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.
ದಿನ ೧, ಮಿಥ್ಯೆ ೧ : ಕನ್ನಡದ ಹುಟ್ಟು
ದಿನ ೨, ಮಿಥ್ಯೆ ೨ : ಕನ್ನಡ ಲಿಪಿ
ದಿನ ೩, ಮಿಥ್ಯೆ ೩ : ಕನ್ನಡದ ಅರಾಷ್ಟ್ರೀಯತೆ
ದಿನ ೪, ಮಿಥ್ಯೆ ೪ : ಕನ್ನಡದ ಪ್ರಾಂತೀಯತೆ
ದಿನ ೫, ಮಿಥ್ಯೆ ೫ : ಕನ್ನಡದ ಅದೈವಿಕತೆ
ದಿನ ೬, ಮಿಥ್ಯೆ ೬ : ಕನ್ನಡದ ದುಷ್ಪ್ರಭಾವ
ದಿನ ೭, ಮಿಥ್ಯೆ ೭ : ಕನ್ನಡದ ಕಠಿನತೆ
ದಿನ ೮, ಮಿಥ್ಯೆ ೮ : ಕನ್ನಡದ ವೈಜ್ಞಾನಿಕ ದೌರ್ಬಲ್ಯ
ದಿನ ೯, ಮಿಥ್ಯೆ ೯ : ಕನ್ನಡದ ಮರೆವು
ದಿನ ೧೦, ಮಿಥ್ಯೆ ೧೦ : ಕನ್ನಡದಲ್ಲಿ ಆಡಳಿತ
ರಾಜ್ಯೋತ್ಸವ ಬೋನಸ್! ಮಿಥ್ಯೆ ೧೧. ಕನ್ನಡಿಗರು ಅಭಿಮಾನಶೂನ್ಯರು!
ಪುರಾಣ ಅಂದರೆ ಹಿಂದಿನದು, ಹಳೆಯದು. ಅದೆಲ್ಲ ಒಳ್ಳೆಯದು. ಹೊಸದೆಲ್ಲವೂ ಕೆಟ್ಟದ್ದು. ಹಿಂದಿನದನ್ನು ಪ್ರಶ್ನಾತೀತವಾಗಿ ಪಾಲಿಸಬಹುದು. ಆದರೆ ಹೊಸದನ್ನು ಒಪ್ಪಿಕೊಳ್ಳುವ ಮಾತೇ ಇಲ್ಲ. ಈ ಸಾಮಾನ್ಯ ನಿಲುವು ಎಷ್ಟು ಸರಿ? ಕಾಳಿದಾಸ ಹೇಳಿದ್ದೇನು? ಕವಿ ಕಾಣದ್ದನ್ನು ಕಂಡವರಾರು? ಗಾದೆ ಮಾತು ಹೇಳಿದ್ದೇನು?
ಮಳವಳ್ಳಿ ಮ್ಹಾದೇವಸ್ವಾಮಿಯವರ, ಸುಮಾರು ಮೂರು ದಶಕಗಳ ಹಿಂದೆಯೆ ರೆಕಾರ್ಡ ಮಾಡಿದ, ಮಹಾಭಾರತ ಆಧಾರಿತ, ಕಂಸಾಳೆ ಶೈಲಿಯ ಜಾನಪದ ಹಾಡೊಂದು ಇಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. ಈ ಹಾಡಿನ ಹಿನ್ನೆಲೆ ಏನು? ಅದರಲ್ಲಿನ “ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ” ಎನ್ನುವ ಒಂದೇ ಒಂದು ಸಾಲಿನಿಂದ ಇಂದಿನ ಯುವಕರ ಮನ ತಟ್ಟಲು ಏನು ಕಾರಣ? ಬದಲಾದ ಭಾರತದ ಸಾಮಾಜಿಕ ಪರಿಸ್ಥಿತಿಯೆ? ಸುಧಾರಿಸಿದ ಆರ್ಥಿಕ ಸ್ಥಿತಿಯೆ? ಹೆಣ್ಣು ಮಕ್ಕಳು ವಿದ್ಯಾವಂತರಾಗಿ ಸ್ವಂತಿಕೆಯನ್ನು ಗಳಿಸಿದ್ದೆ? ಕ್ಷೀಣವಾದ ಪುರುಷಪ್ರಾಧಾನ್ಯತೆಯೆ? ಬದಲಿಸಲು ಕಠಿನವಾದ ಮನೋಸ್ಥಿತಿಯೆ? ಸಮಾಜದ ಒಳ್ಳೆಯ ಬೆಳವಣಿಗೆಗಳ ಜೊತೆಗೆ ಅನಿರೀಕ್ಷಿತ ದುಷ್ಪರಿಣಾಮಗಳೂ ಉಂಟೆ? ಈ ಪುರಾಣ-ವೈರಾಣದಲ್ಲಿ ಹೈರಾಣಾದವರು ಯಾರು? ಇವೆಲ್ಲವನ್ನೂ ತಮ್ಮ ಹರಿತ ಲೇಖನಿಯಿಂದ ಇಲ್ಲಿ ವಿಶ್ಲೇಷಿಸಿದ್ದಾರೆ ಸಂಜಯ ಹಾವನೂರ.