Opinion/Reflections

ಮುಗ್ಧ ಮನಸ್ಸುಗಳ ಸಾಕ್ಷಾತ್ಕಾರವೇ ಸಾಕೇತ ಸಿದ್ಧಾಂತ, ಒಂದು ಸಂದೇಶ

[ಮೊನ್ನೆ ತಾನೆ ಕನ್ನಡ ಕಲಿಯ ಬಿತ್ತರಿಕೆ ಬಿಕಾಸ ೧೧-೨೦೨೩-೦೧ರಲ್ಲಿ ನಿಮಗೆ ಪರಿಚಯಿಸಿದ ಸಾಕೇತ ಸಿದ್ದಾಂತಕ್ಕೆ ಸ್ಪಂದಿಸಿ ಒಂದು ಸಂದೇಶವನ್ನು, ಲಲಿತ ಪ್ರಬಂಧವನ್ನು ಅನ್ನಿ, ಕಳಿಸಿದ್ದಾರೆ ರೂಪ ಮಂಜುನಾಥ. ಕರ್ನಾಟಕ ಸಾಂಸ್ಕೃತಿಕ ಸಂಘದ ಸುವರ್ಣ ಮಹೋತ್ಸವ‌ ಕಾರ್ಯಕ್ರಮದ ಕವಿಗೋಷ್ಠಿಯಲ್ಲಿ, ಕವನ ಓದಿದ ಮಕ್ಕಳ ಬಗ್ಗೆ, ಅವರನ್ನು ಬೆಳೆಸಿದ ತಾಯಿ ತಂದೆಯರ ಬಗ್ಗೆ, ಅರಳು ಮಲ್ಲಿಗೆ ಮತ್ತು ಗೋಕುಲ ಮಕ್ಕಳು ಎನ್ನುವ ಪುಟ್ಟ ಕನ್ನಡ ಸಾಂಸ್ಕೃತಿಕ ಸಮುದಾಯಗಳ ಬಗ್ಗೆ, ಹಾಗೂ ಸಾಕೇತ ಸಿದ್ಧಾಂತರ ಕವನಗಳನ್ನು ಪ್ರಕಟಿಸಿದ ಕನ್ನಡ ಕೂಟದ ಸ್ಮರಣ ಸಂಚಿಕೆಯ ಬಗ್ಗೆ,  ತಮ್ಮ ಅನಿಸಿಕೆಗಳನ್ನು ಇಲ್ಲಿ ತೆರೆದಿಟ್ಟಿದ್ದಾರೆ. ]

ಕನ್ಸಡಕ್ಕೊಂದು ಸಾಕೇತ ಸಿದ್ಧಾಂತ

ಕನ್ನಡಕ್ಕೊಂದು

ಸಾಕೇತ ಸಿದ್ಧಾಂತ

ಏನಿದು ಸಾಕೇತ ಸಿದ್ಧಾಂತ?‌
ಕನ್ನಡ ಕೇವಲ ಒಂದು ವ್ಯಾವಹಾರಿಕ ಮಾಧ್ಯಮವೋ?‌ ಆಥವ ಅದಕ್ಕಿಂತ ಮಿಗಿಲಾದ ಮೌಲ್ಯ ಏನಾದರೂ ಅದರಲ್ಲಿ ಇದೆಯೆ? ಕನ್ನಡ ಕಲಿಯಲು ಅತ್ಯಂತ ಪರಿಣಾಮಕಾರಿ ವಿಧಾನ ಯಾವುದು?

 

ಅಸ್ಥಿರವಾಗುತ್ತಿರುವ ಕುಟುಂಬ ವ್ಯವಸ್ಥೆ

ದೇಶ ಅಭಿವೃದ್ಧಿ ಆದಂತೆ, ಸಾಮಾಜಿಕ ಮತ್ತು ಕೌಟುಂಬಿಕ ವ್ಯವಸ್ಥೆ ಶಿಥಿಲವಾಗಿ ಹಲವು ಸಂಪ್ರದಾಯಗಳು ಮೊಟಕುಗೊಂಡರೆ ಇನ್ನು ಕೆಲವು ಸಂಪೂರ‍್ಣ ಮಾಯವಾಗುವವು.  ಇದು ಅನಿವಾರ್ಯವೆ? ಸಂಪ್ರದಾಯಗಳ ಉದ್ದೇಶಗಳನ್ನು ಅರಿತು ಮೂಲಭೂತ ಅಂಶಗಳನ್ನು ಉಳಿಸಿಕೊಂಡು, ಅರ್ಥಪೂರ್ಣವಾಗಿ ಆಚರಿಸಲು ಸಾಧ್ಯವೆ? ಈ ನಿಟ್ಟಿನಲ್ಲಿ, ಇಂಥ ಪರಿಸ್ಥಿತಿಗೆ ನಾವು ಬಂದು ಮುಟ್ಟಿರುವ ಕಾರಣಗಳನ್ನು ಕೆದಕಿ ನೋಡುವುದು ಅವಶ್ಯ.

ಕಲೆಯ ಕಲಿಕೆ - ಇಂದಿಗೆ ಬೇಕೇ?

"ಶಾಸ್ತ್ರೀಯ ಕಲೆಗಳು ಕಲಿಯಲು ಕಷ್ಟ, ಕೆಲವರಿಗಷ್ಟೇ ಸೀಮಿತ, ಈಗಿನ ತಂತ್ರಜ್ಞಾನದ ಯುಗದಲ್ಲಿ ಕೆಲಸಕ್ಕೆ ಬಾರದ್ದು; ಶಾಸ್ತ್ರೀಯ ಸಂಗೀತ ನೃತ್ಯಗಳನ್ನು ನೋಡೋರು ಯಾರು? ಕಲಿಯಲು ಸಮಯ ಎಲ್ಲಿದೆ?"  ಈ ಎಲ್ಲ ಪ್ರಶ್ನೆಗಳಿಗೆ ಸಮಾಧಾನಕರವಾಗಿ  ಉತ್ತರಿಸಿದ್ದಾರೆ;  ಕಲೆ ನಮ್ಮ ಬದುಕು, ಅನಿವಾರ್ಯ; ಕಲಿಕೆ ಅವಶ್ಯ ಮತ್ತು ಕರ್ತವ್ಯ ಎಂದು ತೋರಿಸಿ ಕೊಟ್ಟಿದ್ದಾರೆ ಸಂಗೀತ-ನೃತ್ಯ ಕಲಾವಿದೆ ಸಂಧ್ಯಾ ಮಹೇಶ್

ಕನ್ನಡದ ಅಭಿವೃದ್ದಿಗೆ ತೊಡಕಾಗಿರುವ ಅಂಶಗಳು

ವರ್ಷ ೨೦೦೦ದಲ್ಲಿ ಹುಟ್ಟು ಹಾಕಿದ ಕನ್ನಡ ಕಲಿಯ ಅಭಿಯಾನ ಫಲಪ್ರದವಾಗಿ ಮುಂದುವರೆಯುತ್ತಿದೆ. ವಿದೇಶಗಳಲ್ಲಿ ಕನ್ನಡ ಶಾಲೆಗಳು ಹುಟ್ಟುತ್ತಿದ್ದು ಕನ್ನಡ ಕಲಿಕೆ ಹೆಚ್ಚುತ್ತಿರುವುದು ಸ್ವಾಗತಾರ್ಹ. ಇದರಲ್ಲಿ ಕೇವಲ ಕನ್ನಡ ಪ್ರೀತಿ ಅಭಿಮಾನಗಳಿಂದ, ಮಕ್ಕಳನ್ನು ಕನ್ನಡ ಸಂಸ್ಕೃತಿಯಲ್ಲಿ ಬೆಳೆಸುವ ಹಂಬಲದಿಂದ ತಮ್ಮನ್ನು ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳುತ್ತಿರುವ ತಂದೆ ತಾಯಂದಿರು ಸ್ತುತ್ಯಾರ್ಹರು. ಕನ್ನಡ ಕಾಯಕದ ಅಡಿಯಲ್ಲಿ, ಕರ್ನಾಟಕದಲ್ಲಿನ ಸರಕಾರಿ ಸಂಸ್ಥೆಗಳು ಮತ್ತು ಮಾಧ್ಯಮಗಳು ವಿದೇಶಗಳಲ್ಲಿನ ಕನ್ನಡದತ್ತ ತಮ್ಮ ದೃಷ್ಟಿಯನ್ನು ಕೇಂದ್ರೀಕರಿಸಿದ್ದಾರೆ. ಆದರೆ ಕರ್ನಾಟಕದಲ್ಲೇ ಕನ್ನಡದ ಸ್ಥಿತಿ ಚಿಂತನೀಯವಾಗಿರುವಾಗ, ಇದು ಬೇರಿಗೆ ಹುಳ ಹತ್ತಿರುವಾಗ ಹೂಗಳನ್ನು ಅರಳಿಸುವ ಅಥವಾ ಕೆಳಗೆ ತೂಗಾಡುತ್ತಿರುವ ಹಣ್ಣುಗಳನ್ನು ಬಾಚಿಕೊಳ್ಳುವ ಯತ್ನ ಎನ್ನಿಸುವುದು ಸಹಜ. ಹಾಗಾಗದಿರಲು, ಕರ್ನಾಟಕದಲ್ಲಿ ಕನ್ನಡದ ಅಭಿವೃದ್ಧಿ ಏಕೆ ಕುಂಠಿತವಾಗಿದೆ, ಅದಕ್ಕೆ ತೊಡಕಾಗಿರುವ ಅಂಶಗಳು ಯಾವವು, ಇವುಗಳನ್ನು ತಿಳಿದುಕೊಂಡರೆ ಸರಿಯಾದ ಪರಿಹಾರಗಳನ್ನು ರೂಪಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಶ್ರೀಯುತ ವಿವೇಕ ಅವರ ಲೇಖನ ಕಣ್ಣು ತೆರೆಸುವಂತಿದೆ.

ಆಸೆಯೇ ದುಃಖಕ್ಕೆ ಮೂಲವೇ?

ನನ್ನ ಮಗನಿಗೆ ೫ ವರುಷವಾಗಿದ್ದಾಗ ಒಂದು ಆಟಿಕೆಗಾಗಿ ಬೇಡಿಕೆಯಿಟ್ಟ. ಅದನ್ನು ನಾವು ಕೊಡಿಸಿದೆವು. ಮಾರನೇ ದಿನವಷ್ಟೇ ಅದೇ ಸರಣಿಯಲ್ಲಿಯ ಇನ್ನೊಂದು ಬೊಂಬೆ ಬೇಕೆಂದು ಹಠ ಶುರುವಾಯಿತು. ವಿಷಯ ಮರೆಸುವ ನನ್ನ ಯಾವುದೇ ಮಾಮೂಲಿನ ತಂತ್ರಗಳು ನಿಷ್ಪ್ರಯೋಜಕವಾಗಿ ಸಣ್ಣ ಅಳುಕ ಮುಂದುವರೆಯಿತು.

ಎಲ್ಲ ಆಸೆಗಳನ್ನು ಪೂರೈಸಬೇಕೇ? ಪೂರೈಸಿದಂತೆ ಆಸೆಯ ಬಳ್ಳಿ ಬೆಳೆಯುತ್ತಲೇ ಹೋಗುತ್ತದೆಯೇ? ಯಾರಿಗೆ ದುಃಖ? ಯಾರಿಗೆ ಕೋಪ? ಯಾರಿಗೆ ಮರುಕ? ಮಗುವಿನ ಮನಸ್ಸನ್ನು ನೋಯಿಸದೆ, ವಾದ-ಪ್ರತಿವಾದಗಳಿಗೆ ಎಡೆ ಕೊಡದೆ, ಜೀವನದ ಪಾಠಗಳನ್ನು ಕಲಿಸುವುದು ಹೇಗೆ? "ಸುಳ್ಳು" ತಂದೆ-ತಾಯಿಗಳಿಗೆ ಸಮರ್ಥ ಅಸ್ತ್ರವಾದಿತೇ? ಇಂದಿನ "ಬಿಳಿ ಸುಳ್ಳು" ನಾಳೆ ಬೆಳೆದು ಮುಳ್ಳು ಆದೀತೆ? ಈ ಪ್ರಶ್ನೆಗಳ ಮೇಲೆ ಅನುಭವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ ಶೃತಿ ಅರವಿಂದ್.

ಡುಮಿಂಗ : ಒಂದು ಅನಿಸಿಕೆ

ಮೊತ್ತ ಮೊದಲು ಕುತೂಹಲ ಕೆರಳಿಸುವುದು ಡುಮಿಂಗ ಅನ್ನುವ ಹೆಸರು. ಇಂಗ್ಲಿಷಿನಲ್ಲಿ Dummy, Idiot ಅಂತ ಅರ್ಥಗಳಿವೆ. ಕನ್ನಡದಲ್ಲಿ ಡುಮ್ಮ, ಡುಮ್ಮಣ್ಣ, ಡುಮ್ಮಿ, ಡುಮ್ಮಕ್ಕ ಅಂತ ಮುದ್ದಿನಿಂದ ಮಕ್ಕಳಿಗೆ ಕರೆಯುವ ವಾಡಿಕೆಯೂ ಇದೆ.

ಕನ್ನಡದ ಬಗ್ಗೆ ಅಭಿರುಚಿ ಮೂಡುವಂತೆ ಮಾಡುವುದೇ ಕನ್ನಡದ ಅಭಿವೃದ್ಧಿ

ಒಂದು ಭಾಷೆಯ ಬೆಳವಣಿಗೆ ಆಗಬೇಕು ಎಂದರೆ ಅದು ಆ ಭಾಷೆಯನ್ನು ಹೆಚ್ಚು ಹೆಚ್ಚು ಜನರು ಬಳಸಿದರೆ ಮಾತ್ರ ಸಾಧ್ಯವಿರುವುದು. ಬದಲಾಗಿ ಇನ್ನೊಂದು ಭಾಷೆಯನ್ನು ವಿರೋಧಿಸುವುದು, ಅನ್ಯ ಭಾಷೆಯನ್ನಾಡುವ ಜನರನ್ನು ವಿರೋಧಿಸುವುದು ಇದು ನಮಗೆ ನಮ್ಮ ಭಾಷೆ ಮತ್ತು ರಾಜ್ಯದ ಬಗ್ಗೆ ಇರುವ ಭಯವನ್ನು ಸೂಚಿಸುವುದೇ ವಿನಃ ಇದರಿಂದ ಯಾವುದೇ ಬದಲಾವಣೆ ಖಂಡಿತಾ ಆಗುವುದಿಲ್ಲ.

ರಾಷ್ಟ್ರೀಯ ಮತದಾರರ ದಿನ ಮತ್ತು ಪ್ರಜಾಪ್ರಭುತ್ವ

ಪ್ರಜಾಪ್ರಭುತ್ವದಲ್ಲಿ ದೃಢವಿಶ್ವಾಸವುಳ್ಳ ಭಾರತದ ಪೌರರಾದ ನಾವು, ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆಂದೂ, ಪ್ರತಿಯೊಂದು ಚುನಾವಣೆಯಲ್ಲಿ ನಿಭೀ೯ತರಾಗಿ ಮತ್ತು ಧರ್ಮ,ಜನಾಂಗ,ಜಾತಿ,ಮತ,ಭಾಷೆ ಅಥವಾ ಯಾವುದೇ ಪ್ರೇರೇಪಣೆ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆಂದೂ ಈ ಮೂಲಕ ಪ್ರತಿಜ್ಞೆ ಸ್ವೀಕರಿಸುತ್ತೇವೆ.

ಮೊಬೈಲ್

ಮೊಬೈಲ್ ಮಾನವನ ಅಗತ್ಯವನ್ನು ಪೂರೈಸುವ ಒಂದು ವಸ್ತುವೆ ಅಥವಾ ಅನಿವಾರ್ಯವೆ? ಬೆಳಿಗ್ಗೆ ಎದ್ದು ಮುಂದಿನ ಕಾರ್ಯಕ್ರಮವನ್ನು ನಿಗದಿ ಮಾಡುವುದರಿಂದ ಹಿಡಿದು, ರಾತ್ರಿ ಆತ್ಮೀಯರಿಗೆ ಗುಡ್ನೈಟ್ ಮೇಸೆಜ್ ಕಳುಹಿಸುವರೆಗೂ ಮೊಬೈಲ್ ಅಗತ್ಯವಾಗಿದೆ. ಇಂದು ಎಲ್ಲಾ ಹಳ್ಳಿಗಳಲ್ಲಿಯೂ ಒಬ್ಬರೆ ಮಾತನಾಡುವವರು ಅಲ್ಲಲ್ಲಿ ಸಿಗುತ್ತಾರೆ. ವ್ಯತ್ಯಾಸ ಇಷ್ಟೇ - ಅವರನ್ನು ಯಾರೂ ಮಳ್ಳ, ಹುಚ್ಚ ಎಂದು ಪರಿಗಣಿಸುವುದಿಲ್ಲ. ನಮ್ಮ ಪರಿಸರದಲ್ಲಿ ಇದ್ದ ಗುಬ್ಬಿಯಂತಹ ಹಲವಾರು ಪಕ್ಷಿ, ಕೀಟಗಳು ಸಂಪರ್ಕ ಕ್ರಾಂತಿಯಿಂದ ಮರೆಯಾಗಿವೆ. ಅದರಂತೆ ಮಾನವನ ಮೇಲೂ ಹಲವಾರು ದುಷ್ಪಪರಿಣಾಮಗಳು ಆಗುತ್ತಾ ಇದ್ದರೂ, ಏನು ಕಾಣಿಸುತ್ತಿಲ್ಲವಾಗಿವೆ.