ಭಜ ಗೋವಿಂದಂ - ಕಂತು ೩

ಆದಿ ಶಂಕರ ಮತ್ತು ಶಿಷ್ಯರು ರಚಿಸಿದ

ಭಜ ಗೋವಿಂದಂ

(ಮೋಹಮುದ್ಗರ)

ಕನ್ನಡ ಪದ್ಯಾನುವಾದ - ವಿಶ್ವೇಶ್ವರ ದೀಕ್ಷಿತ

 

ಕಂತು ೧: ನುಡಿ ೧ – ೧೩,
ಪಲ್ಲವಿಯೊಡನೆ ಹನ್ನೆರಡು ಹೂಗಳ ಗೊಂಚಲು

ಕಂತು ೨: ನುಡಿ ೧೪ – ೨೭ : ಚತುರ್ದಶ ಮಂಜರಿಕಾ

ಕಂತು ೩: ನುಡಿ ೨೮ – ೩೧ : ಉಪಸಂಹಾರ

 

 

ಮೋಹಮುದ್ಗರ

ಭಜ ಗೋವಿಂದಂ

ಮೂಲ: ಆದಿ ಶಂಕರ

 

 

 ಮರುಳಿಗೆ ಮದ್ದು

ನೆನೆ ಗೋವಿಂದನ

ಕನ್ನಡಕ್ಕೆ: ವಿಶ್ವೇಶ್ವರ ದೀಕ್ಷಿತ

ಸುಖತಃ ಕ್ರಿಯತೇ ರಾಮಾಭೋಗಃ;

   ಪಶ್ಚಾದ್ದಂತ ಶರೀರೇ ರೋಗಃ.

ಯದ್ಯಪಿ ಲೋಕೇ ಮರಣಂ ಶರಣಂ,

   ತದಪಿ ನ ಮುಂಚತಿ ಪಾಪಾಚರಣಂ.

೨೮

ಸುಲಭದಿ ತೊಡಗುವ ಅತಿ ರತಿ ಭೋಗದಿ;

   ಮೈ ರೋಗದಿ ನರಳುವ ನಂತರದಿ.

ಈ ಲೋಕದಿ, ಸಾವೇ ಕೊನೆ ಎನೆ ಸಹ

   ಕೆಡಕಿನ ನಡೆಯನು ಎಂದೂ ಬಿಡನು!

‘ಅರ್ಥಮನರ್ಥಂ ಭಾವಯ ನಿತ್ಯಂ;

   ನಾಸ್ತಿ ತತಃ ಸುಖಲೇಶಃ ಸತ್ಯಂ.

ಪುತ್ರಾದಪಿ ಧನಭಾಜಾಂ ಭೀತಿಃ;

   ಸರ್ವತ್ರೈಷಾ ವಿಹಿತಾ ರೀತಿಃ.

೨೯

ಸಿರಿ ಶಾಂತಿಗೆ ಉರಿ ಎಂದರಿ ನಿತ್ಯವು.

 ಎಂದಿಗು ನಿಜ ಸುಖ ಅದರಿಂದಿಲ್ಲ.

ಸಿರಿ ಇರೆ ಭಯ, ಸಂಶಯ ಮಗನಲ್ಲೂ!

   ಇಂತಿದೆ ಎಲ್ಲೆಡೆ ಸಿರಿತನದಾಟ.

ಪ್ರಾಣಾಯಾಮಂ, ಪ್ರತ್ಯಾಹಾರಂ,

   ನಿತ್ಯಾನಿತ್ಯವಿವೇಕವಿಚಾರಂ,

ಜಾಪ್ಯಸಮೇತ ಸಮಾಧಿವಿಧಾನಂ

   ಕುರ್ವವಧಾನಂ, ಮಹದವಧಾನಂ.

೩೦

ಉಸಿರಾಟದ ಗತಿ ಕರಣಗಳ ಹಿಡಿತ,

   ಹುಸಿ ದಿಟಗಳ ಅಂತರದ ವಿಚಾರ,

ಸಮಾಧಿಯನೇರುವ ಪರಿ, ಜಪಗಳನು

   ಗಮನಿಸಿ ಗೆಯ್, ಬಲು ಗಮನಿಸಿ ನೀನು.

ಗುರುಚರಣಾಂಬುಜ ನಿರ್ಭರಭಕ್ತಃ,

   ಸಂಸಾರಾದಚಿರಾದ್ಭವ ಮುಕ್ತಃ,

ಸೇಂದ್ರಿಯಮಾನಸ ನಿಯಮಾದೇವಂ

   ದ್ರಕ್ಷ್ಯಸಿ ನಿಜ ಹೃದಯಸ್ಥಂ ದೇವಂ.

೩೧

ಗುರುವಿನ ಅಡಿ ತಾವರೆಗಳ ಬಂಡುಣಿ,

   ಪಡೆಯುವಿ ಕಡು ಬಿಡುಗಡೆಯನು ಭರದಿ;

ಬಿಗಿದಿಂದ್ರಿಯಗಳ ಹಿಡಿದಿಡು ಮನವನು,

   ತೋರುವ ನಿನ್ನೆದೆ ಒಳಗಿನ ಒಡೆಯ.

ಬಿತ್ತರಿಕೆ, ಫೆಬ್ರುವರಿ ೨೫, ೨೦೨೫

ಆದಿ ಶಂಕರ ಮತ್ತು ಶಿಷ್ಯರು ರಚಿಸಿದ
ಮೋಹಮುದ್ಗರ
( ಅಥವಾ, ಭಜ   ಗೋವಿಂದಂ)

ಕಂತು ೧: ನುಡಿ ೨೮ ರಿಂದ  ೩೧
ಉಪಸಂಹಾರ

ನೆನೆ ಗೋವಿಂದನ
ಕನ್ನಡಕ್ಕೆ: ವಿಶ್ವೇಶ್ವರ ದೀಕ್ಷಿತ‌

ಸಂಪರ್ಕ: ನಮೋವಿಶ್ ಯ್ಯಾಟ್ ಯಾಹೂ  ಡಾಟ್ ಕಾಮ್ :
ನಾನು, ಸಪ್ನಾ ಗೂಗ್ಲೇ