ಆದಿ ಶಂಕರ ಮತ್ತು ಶಿಷ್ಯರು ರಚಿಸಿದ
ಭಜ ಗೋವಿಂದಂ - ಕಂತು ೨
(ಮೋಹಮುದ್ಗರ)
ಕನ್ನಡ ಪದ್ಯಾನುವಾದ - ವಿಶ್ವೇಶ್ವರ ದೀಕ್ಷಿತ
ಕಂತು ೧: ನುಡಿ ೧ – ೧೩,
ಪಲ್ಲವಿಯೊಡನೆ ಹನ್ನೆರಡು ಹೂಗಳ ಗೊಂಚಲು
ಕಂತು ೨: ನುಡಿ ೧೪ – ೨೭ : ಚತುರ್ದಶ ಮಂಜರಿಕಾ
ಕಂತು ೩: ನುಡಿ ೨೮ – ೩೧ : ಉಪಸಂಹಾರ
ಮೋಹಮುದ್ಗರ |
|
ಮರುಳಿಗೆ ಮದ್ದು |
ಜಟಿಲೋ ಮುಂಡೀ, ಲುಂಚಿತಕೇಶಃ, ಕಾಷಾಯಾಂಬರಬಹುಕೃತವೇಷಃ, ಪಶ್ಯನ್ನಪಿ ಚ ನ ಪಶ್ಯತಿ, ಮೂಢಃ. ಉದರನಿಮಿತ್ತಂ ಬಹುಕೃತವೇಷಃ! |
೧೪ | ಜಡೆಯನು ಬಿಡೆ, ಬೋಳಿಸೆ, ಯಾ ಕಿತ್ತಿರೆ, ಕಾವಿಯ ಬಟ್ಟೆಯ ತೊಟ್ಟಿರೆ ಏನು? ಕಂಡರು ಕಾಣದೆ ಇರುವನು ಮರುಳನು. ಹೊಟ್ಟೆಯ ಪಾಡಿಗೆ ಹಲ ಬಗೆ ಸೋಗು! |
ಅಂಗಂ ಗಲಿತಂ, ಪಲಿತಂ ಮುಂಡಂ, ದಶನವಿಹೀನಂ ಜಾತಂ ತುಂಡಂ, ವೃದ್ಧೋ, ಯಾತಿ ಗೃಹೀತ್ವಾ ದಂಡಂ; ತದಪಿ ನ ಮುಂಚತ್ಯಾಶಾಪಿಂಡಂ. |
೧೫ | ಇಳಿದಿದೆ ಕಾಯವು, ನೆರೆದಿವೆ ಕೂದಲು, ಬೋಡಾಗಿದೆ ಬಾಯ್ ಹಲ್ಲುಗಳುದುರಿ; ಕೈಯಲಿ ಬಡಿಗೆಯು, ಮುದಿ ಜೋಲ್ ನಡಿಗೆಯು; ಆದರು ಒಡೆಯದು ಬಯಕೆಯ ಗಡಿಗೆ. |
ಅಗ್ರೇ ವಹ್ನಿಃ, ಪೃಷ್ಠೇಭಾನುಃ, ರಾತ್ರೌ ಚುಬುಕಸಮರ್ಪಿತಜಾನುಃ; ಕರತಲಭಿಕ್ಷಸ್ತರುತಲವಾಸಃ; ತದಪಿ ನ ಮುಂಚತ್ಯಾಶಾಪಾಶಃ. |
೧೬ | ಮುಂಗಡೆ ಬೆಂಕಿಯು, ಹಿಂಗಡೆ ನೇಸರ; ಇರುಳಿಡಿ ಮೊಳಕಾಲ್ ಮೇಗಡೆ ಗದ್ದ; ಕರದಲಿ ತಿರುಪೆಯು, ಮರದಡಿ ವಸತಿಯು; ಆದರು ಬಿಗಿವುದು ಬಯಕೆಯ ಹಗ್ಗ. |
ಕುರುತೇ ಗಂಗಾಸಾಗರಗಮನಂ, ವ್ರತಪರಿಪಾಲನಮಥವಾ ದಾನಂ; ಜ್ಞಾನವಿಹಿನಃ, ಸರ್ವಮತೇನ, ಭಜತಿ ನ ಮುಕ್ತಿಂ, ಜನ್ಮಶತೇನ. |
೧೭ | ಗಂಗೆಯು ಕಡಲಲಿ ಇಳಿವೆಡೆ ಯಾತ್ರೆಯು, ನೋಂಪಿಯ ಪಾಲನೆ, ಬಿಡುಗೈ ಕೊಡುಗೆ; ಆದರು ನೈಜದ ಸರಿ ತಿಳಿವಿರದಿರೆ ನೂರೇಳ್ ಹುಟ್ಟಿಗು ಬಿಡುಗಡೆ ಉಂಟೆ? |
ಸುರಮಂದಿರ, ತರುಮೂಲ ನಿವಾಸಃ, ಶಯ್ಯಾ ಭೂತಲಮಜಿನಂ ವಾಸಃ, ಸರ್ವ ಪರಿಗ್ರಹ ಭೋಗ ತ್ಯಾಗಃ, ಕಸ್ಯ ಸುಖಂ ನ ಕರೋತಿ ವಿರಾಗಃ? |
೧೮ | ದೇವರ ಗುಡಿ, ಗಿಡ ಬುಡದಲಿ ಬಿಡದಿಯು; ತೊಗಲಿನ ಉಡುಗೆಯು; ನಿದ್ದೆಯು ನೆಲದಿ - ಊಡುವ, ಪಡೆಯುವ ದಾಹವನಿಂತಳಿ. ಬೆಸುಗೆಯು ಕರಗಲು ಒಸರದೆ ಸೊಗವು? |
ಯೋಗರತೋ ವಾ ಭೋಗರತೋ ವಾ; ಸಂಗರತೋ ವಾ ಸಂಗವೀಹಿನಃ; ಯಸ್ಯ ಬ್ರಹ್ಮಣಿ ರಮತೇ ಚಿತ್ತಂ, ನಂದತಿ ನಂದತಿ ನಂದತ್ಯೇವ. |
೧೯ | ಯೋಗದಿ ಮುಳುಗಿರು, ಭೋಗದಿ ತೊಡಗಿರು, ಸಂಗದಿ ಯಾ ಏಕಾಂತದಿ ರಮಿಸು, ಬ್ರಹ್ಮದಿ ಮನವನು ನೆಟ್ಟಿರಲನುಚಣ ನಲಿಯುವ, ನಲಿಯುವ, ನಲಿಯುವ ಅವನೆ. |
ಭಗವದ್ ಗೀತಾ ಕಿಂಚಿದಧೀತಾ, ಗಂಗಾ ಜಲಲವಕಣಿಕಾ ಪೀತಾ, ಸಕೃದಪಿ ಯೇನ ಮುರಾರಿ ಸಮರ್ಚಾ, ಕ್ರಿಯತೇ ತಸ್ಯ ಯಮೇನ ನ ಚರ್ಚಾ. |
೨೦ | ಭಗವದ್ಗೀತೆಯನಿಂತುಟು ಕಲಿತಿರೆ, ಗಂಗೆಯ ಹನಿ ಒಂದಾದರು ಸವಿಯೆ, ಅಚ್ಯುತನನರ್ಚಿಸೆ ಬಾಳಿನಲೊಮ್ಮೆ ಅವನೊಡ ವಾದಿಸುವನೆ ಜವರಾಯ? |
ಪುನರಪಿ ಜನನಂ, ಪುನರಪಿ ಮರಣಂ, ಪುನರಪಿ ಜನನೀಜಠರೇ ಶಯನಂ - ಇಹ ಸಂಸಾರೇ ಬಹುದುಸ್ತಾರೇ, ಕೃಪಯಾಽಪಾರೇ, ಪಾಹಿ ಮುರಾರೇ. |
೨೧ | ಮತ್ತೂ ಹುಟ್ಟುತ, ಮತ್ತೂ ಸಾಯುತ, ಮತ್ತೂ ತಾಯಿಯ ಒಡಲಲಿ ಒರಗು! ದಾಟಲು ಕಠಿನವು ಈ ಸಂಸಾರವು, ಅಮಿತ ದಯಾಲುವೆ, ಸಲಹೊ ಮುರಾರೆ! |
ರಥ್ಯಾಚರ್ಪಟ ವಿರಚಿತ ಕಂಥಃ, ಪುಣ್ಯಾಪುಣ್ಯ ವಿವರ್ಜಿತ ಪಂಥಃ, ಯೋಗೀ ಯೋಗನಿಯೋಜಿತ ಚಿತ್ತೋ, ರಮತೇ ಬಾಲೋನ್ಮತ್ತವದೇವ. |
೨೨ | ಬಟ್ಟೆಯ ಚಿಂದಿಯ ಕೌದಿಯ ಹೊದ್ದಿರೆ ಕೆಡಕೂ ಒಳಿತೂ ಎರಡನು ತೊರೆದು ಮನವನು ಯೋಗದಿ ಮುಳುಗಿಸೆ ಯೋಗಿಯು ಮಗುವೋ ಮತ್ತನೊ ಎನೆ ನಲಿಯುವನು. |
ಕಸ್ತ್ವಂ? ಕೋಽಹಂ? ಕುತ ಆಯಾತಃ? ಕಾ ಮೇ ಜನನೀ? ಕೋ ಮೇ ತಾತಃ? ಇತಿ ಪರಿಭಾವಯ, ಸರ್ವಮಸಾರಂ, ವಿಶ್ವಂ ತ್ಯಕ್ತ್ವಾ , ಸ್ವಪ್ನವಿಚಾರಂ. |
೨೩ | "ನೀನಾರ್? ನಾನಾರ್? ಎಲ್ಲಿಂದುದಿಸಿದೆ? ತಾಯಿಯು ನನಗಾರ್? ತಂದೆಯು ಯಾರು?" ಯೋಚಿಸು ಈ ತೆರ, ನೀ, ತಿರುಳಿಲ್ಲದ ಕಲ್ಪಿತ ಕನಸಿನ ಜಗವನು ತೊರೆದು. |
ತ್ವಯಿ ಮಯಿ ಚಾನ್ಯತ್ರೈಕೋ ವಿಷ್ಣುಃ, ವ್ಯರ್ಥಂ ಕುಪ್ಯಸಿ ಮಯ್ಯಸಹಿಷ್ಣುಃ; ಭವ ಸಮಚಿತ್ತಃ ಸರ್ವತ್ರ ತ್ವಂ, ವಾಂಛಸ್ಯಚಿರಾದ್ಯದಿ ವಿಷ್ಣುತ್ವಂ. |
೨೪ | ನನ್ನಲಿ, ನಿನ್ನಲಿ, ಎಲ್ಲೆಡೆ ಇರಲದೆ, ಸುಮ್ಮನೆ ನನ್ನಲಿ ಕೋಪವು ಏಕೆ? ಚಿರ ನೆಲೆ ಗಳಿಸಲು ಬಯಸುವುದಾದರೆ ಎಲ್ಲೆಡೆ ಎಂದಿಗು ಸಮಮನನಾಗು. |
ಶತ್ರೌ, ಮಿತ್ರೇ, ಪುತ್ರೇ, ಬಂಧೌ ಮಾ ಕುರು ಯತ್ನಂ ವಿಗ್ರಹಸಂಧೌ; ಸರ್ವಸ್ಮಿನ್ನಪಿ ಪಶ್ಯಾತ್ಮಾನಂ, ಸರ್ವತ್ರೋತ್ಸೃಜ ಭೇದಾಜ್ಞಾನಂ. |
೨೫ | ಹಗೆಗಳು ಗೆಳೆಯರು ನೆಂಟರು ಸುತರನು ಕೂಡಲು, ಕಾದಲು, ನೀ ಬಯಸದಿರು; ಎಲ್ಲೆಡೆ ತನ್ನನೆ ಕಾಣುತ ನೀ ತೊರೆ ಬೇರೆಯದದು ಎನ್ನುವ ತಿಳಿಯಮೆಯ. |
ಕಾಮಂ, ಕ್ರೋಧಂ, ಲೋಭಂ, ಮೋಹಂ ತ್ಯಕ್ತ್ವಾಽತ್ಮಾನಂ ಭಾವಯ ಸೋಽಹಂ; ಆತ್ಮಜ್ಞಾನ ವಿಹೀನಾ ಮೂಢಾಃ ತೇ ಪಚ್ಯಂತೇ ನರಕನಿಗೂಢಾಃ. |
೨೬ | ಮುನಿಸನು ಮರುಳನು ಆಸೆಯ ಬಯಕೆಯ ತೊರೆ; ಅರಿತಿರು ಅವನೇ ತಾನೆಂದು. ತನ್ನದೆ ನಿಜ ತಿಳಿವಿರದಿಹ ಮರುಳನು ತೊಳಲುವನಳಲಿನ ಸುಳಿಯಲಿ ಸಿಲುಕಿ. |
ಗೇಯಂ ಗೀತಾ ನಾಮಸಹಸ್ರಂ, ಧ್ಯೇಯಂ ಶ್ರೀಪತಿ ರೂಪಮಜಸ್ರಂ, ನೇಯಂ ಸಜ್ಜನಸಂಗೇ ಚಿತ್ತಂ, ದೇಯಂ ದೀನಜನಾಯ ಚ ವಿತ್ತಂ. |
೨೭ | ಕಲಿ ಗೀತೆಯ, ಉಲಿ ಸಾಸಿರ ನಾಮವ, ಸಿರಿಪತಿ ರೂಪವನವಿರತ ನೆನೆಸು; ತೊಡಗಿಸು ಮನವೊಳ್ಳೆಯರೊಡನಾಟದಿ; ಸಿರಿಯನು ಕೊಡು ಗತಿಯಿಲ ಬಡವರಿಗೆ. |
ಬಿತ್ತರಿಕೆ, ಫೆಬ್ರುವರಿ ೨೫, ೨೦೨೫
ಆದಿ ಶಂಕರ ಮತ್ತು ಶಿಷ್ಯರು ರಚಿಸಿದ
ಮೋಹಮುದ್ಗರ
( ಅಥವಾ, ಭಜ ಗೋವಿಂದಂ,.)
ಕಂತು ೨: ನುಡಿ ೧೪ ರಿಂದ ೨೭
ಹದಿನಾಲ್ಕು ಹೂಗಳ ಗೊಂಚಲು.
ನೆನೆ ಗೋವಿಂದನ
ಕನ್ನಡಕ್ಕೆ: ವಿಶ್ವೇಶ್ವರ ದೀಕ್ಷಿತ
ಸಂಪರ್ಕ.: ನಮೋವಿಶ್ ಯ್ಯಾಟ್ ಯಾಹೂ ಡಾಟ್ ಕಾಮ್ :
ನಾನು, ಸಪ್ನಾ ಗೂಗ್ಲೇ.