ಪವಿತ್ರ❤️ಪ್ರೇಮ ಕವನ ಮತ್ತು ಹಿಂದಿನ ಕತೆ
ಸಂಸ್ಕೃತ ಚಮತ್ಕಾವ್ಯ ಪರಂಪರೆಯ ಒಂದು ಇಣುಕು ನೋಟ; ಮತ್ತು ನನ್ನ ಪವಿತ್ರ ಪ್ರೇಮ ಕವನ ಮತ್ತು ಆ ದುಸ್ಸಾಹಸದ ಹಿಂದಿನ ಕತೆ.
ಸಂಸ್ಕೃತ ಚಮತ್ಕಾವ್ಯ ಪರಂಪರೆಯ ಒಂದು ಇಣುಕು ನೋಟ; ಮತ್ತು ನನ್ನ ಪವಿತ್ರ ಪ್ರೇಮ ಕವನ ಮತ್ತು ಆ ದುಸ್ಸಾಹಸದ ಹಿಂದಿನ ಕತೆ.
ಕನ್ನಡದಲ್ಲಿ ಬಾವುಟ ಅಂದರೆ ಧ್ವಜ, ಸಂಕೇತ, ಗುರುತು ಅನ್ನುವುದು ಸಾಮಾನ್ಯ ಅರ್ಥ. ಸರಿಯೋ ತಪ್ಪೋ, ನನಗೆ ತಿಳಿದಂತೆ, ಅದು ಹೀಗೆ ಅಂತ ಅನಿಸುತ್ತದೆ
ಹೊರನಾಡಿನಲ್ಲಿರುವ ಕನ್ನಡ ಮಕ್ಕಳಿಗೆ ಕನ್ನಡವನ್ನು ಕಲಿಸುತ್ತ, ಕನ್ನಡ ಸಂಸ್ಕೃತಿಯ ಪರಿಸರವನ್ನು ಕಲ್ಪಿಸುವ ಉದ್ದೇಶದಿಂದ ವರ್ಷ ೨೦೦೦ ದಲ್ಲಿ ಕ್ಯಾಲಿಫೋರ್ನಿಯದ ಅವೈನ್ ನಗರದಲ್ಲಿ ಕನ್ನಡ ಕಲಿ ಸಂಸ್ಥೆ ಮತ್ತು ಶಾಲೆಗಳು ಪ್ರಾರಂಭವಾದವು. ನಂತರ, ಇದರಿಂದ ಪ್ರೇರಿತವಾಗಿ ಅಮೇರಿಕದ ತುಂಬ ಮತ್ತು ಇತರೆಡೆ 'ಕನ್ನಡ ಕಲಿ' ಶಾಲೆ ಮತ್ತು ಕಾರ್ಯಕ್ರಮಗಳು ಹುಟ್ಟಿಕೊಂಡವು. ಇದು ನಿಮಗೆ ಗೊತ್ತಿರುವ ವಿಷಯ.
ಸ್ವತಂತ್ರವಾಗಿ, ಇಂತಹದೆ ಕಳಕಳಿಯಿಂದ, ಮುಂಬಯಿ ನಗರದಲ್ಲಿ, 'ಚಿಣ್ಣರ ಬಿಂಬ' ಸಂಸ್ಥೆಯನ್ನು ಹುಟ್ಟು ಹಾಕಿ, ಕನ್ನಡ ಮತ್ತು ಕನ್ನಡ ಸಂಸ್ಕೃತಿಗಾಗಿ ಮೌನವಾಗಿ ದುಡಿಯುತ್ತ ಹೆಮ್ಮರವಾಗಿ ಬೆಳೆದು ನಿಂತಿದ್ದಾರೆ ಪ್ರಕಾಶ ಭಂಡಾರಿ. ಇವರ ಕಾರ್ಯ ವೈಖರಿ ಮತ್ತು ಸಾಧನೆಗಳು ಹೊರನಾಡಿನಲ್ಲಿ ಕನ್ನಡಕ್ಕಾಗಿ ದುಡಿಯುತ್ತಿರುವ ನಮ್ಮೆಲ್ಲರಿಗೂ ಆದರ್ಶಪ್ರಾಯ. ಕನ್ನಡ ಕಲಿಗಳೆ, ಇವರನ್ನು ನಾವು ಅಭಿನಂದಿಸುವುದಷ್ಟೇ ಅಲ್ಲ, ಅನುಕರಿಸುವುದೂ ಅಗತ್ಯ.
ಬದುಕು ಮತ್ತು ಬಾಳು, ಈ ಪದಗಳು ಸಮಾನಾರ್ಥಕವೇ? ಇಲ್ಲವಾದರೆ ಏನು ವ್ಯತ್ಯಾಸ? ಜೀವಿಸುವುದು ಹೇಗೆ? ದೀರ್ಘ ಆಯುಷ್ಯದ ಗುಟ್ಟು ಏನು? ಬನ್ನಿ ಕೆದಕಿ ನೋಡೋಣ.
"ವಾಗ್ದೇವಿಯ ಭಂಡಾರದ ಮುದ್ರೆಯನೊಡೆದಂ" ಎಂದು ಮಹಾಕವಿ ರನ್ನ ಸಾವಿರ ವರ್ಷಗಳ ಹಿಂದೆಯೇ ಹೇಳಿದ್ದಾನೆ. ರನ್ನ ಅಷ್ಟೇ ಅಲ್ಲ, ಕವಿರಾಜಮಾರ್ಗದ ಶ್ರೀವಿಜಯನಿಂದ ಕುಮಾರವ್ಯಾಸನ ವರೆಗೂ ಎಲ್ಲ ಕವಿಗಳು ಕನ್ನಡದ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ. ಇದೇ ಪರಂಪರೆ ನವೋದಯ, ನವ್ಯ ಸಾಹಿತ್ಯದಲ್ಲೂ ನಡೆದು ಈಗಲೂ ಮುಂದುವರೆಯುತ್ತಲಿದೆ.
ನಸು ಬಿನದ ಬರಹ (ಬಿತ್ತರಿಕೆ)
ಈ ದಿನ, ಮೃಷ್ಟಾನ್ನ ಭೋಜನ ಮಾಡಿ, ಸೊಂಪಾಗಿ ತಾಂಬೂಲ ಜಗಿದು, ಎಲ್ಲರಿಗೂ ಉಗಿದುಗಿದು, ನಿಮ್ಮ ಬಾಯಲ್ಲಿ ತಯಾರಾದ, ಶುಭಾಶಯದ ಗಿರ್ಮಿಟ್ಟನ್ನು ಯಥೇಚ್ಛವಾಗಿ ಥೂಂತುರಿಸಲು ಯಾರ ಪರ್ಮಿಟ್ಟೂ ಬೇಕಿಲ್ಲ.
ಒಂದು ಭಾಷೆಯ ಬೆಳವಣಿಗೆ ಆಗಬೇಕು ಎಂದರೆ ಅದು ಆ ಭಾಷೆಯನ್ನು ಹೆಚ್ಚು ಹೆಚ್ಚು ಜನರು ಬಳಸಿದರೆ ಮಾತ್ರ ಸಾಧ್ಯವಿರುವುದು. ಬದಲಾಗಿ ಇನ್ನೊಂದು ಭಾಷೆಯನ್ನು ವಿರೋಧಿಸುವುದು, ಅನ್ಯ ಭಾಷೆಯನ್ನಾಡುವ ಜನರನ್ನು ವಿರೋಧಿಸುವುದು ಇದು ನಮಗೆ ನಮ್ಮ ಭಾಷೆ ಮತ್ತು ರಾಜ್ಯದ ಬಗ್ಗೆ ಇರುವ ಭಯವನ್ನು ಸೂಚಿಸುವುದೇ ವಿನಃ ಇದರಿಂದ ಯಾವುದೇ ಬದಲಾವಣೆ ಖಂಡಿತಾ ಆಗುವುದಿಲ್ಲ.
ಬಹುತೇಕ ಎಲ್ಲಾ ಮಕ್ಕಳಿಗೂ ಅವರ ಮಾತೃ ಭಾಷೆ ಅರ್ಥವಾಗುತ್ತಾದ್ರೂ ಮಕ್ಕಳ ಉತ್ತರ ಮಾತ್ರ ಇಂಗ್ಲೀಷ್ ನಲ್ಲೆ. ಇದಕ್ಕೆ ಕಾರಣ ಅವರವಯಸ್ಸಿನ ಮಕ್ಕಳೂ ಅದೇ ಭಾಷೆ ಮಾತನಾಡದಿರುವುದೇ?
ರೂಪಶ್ರೀ ಅವರ ಕನ್ನಡ ಕಲಿಕೆಯ ಬೆಳವಣಿಗೆಯನ್ನು ಪುಟ್ಟಿ ಪ್ರಪಂಚ ದಲ್ಲಿ ಕಾಣಬಹುದು
“ರಾಜ್ಯೋತ್ಸವ ದಿನವನ್ನು ನಾವು ತುಂಬಾ ಸಂಭ್ರಮದಿಂದ ಆಚರಿಸುವೆವು. ನಮ್ಮ ನಾಡು, ನುಡಿ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುತ್ತಿರುವೆವು. ಈ ಆಚರಣೆಯ ಸಂದರ್ಭದಲ್ಲಿ ನಮ್ಮ ಕನ್ನಡ ಭಾಷೆಯ ಸ್ಥಿತಿ ಎಲ್ಲಿಗೆ ತಲುಪಿದೆ. ಇದಕ್ಕೆ ಯಾರು ಕಾರಣ, ನಮ್ಮ ಭಾಷೆಯ ಏಳ್ಗೆಗೆ ಪರಿಹಾರವೇನು ಎಂದು ನಾವು ಗಂಭೀರವಾಗಿ ಚಿಂತಿಸಲು ಇದು ಸಕಾಲವಾಗಿರುವುದು."