Shankara

ನಾನಾರು

ನಾನಾರು

ಆದಿ ಶಂಕರ ವಿರಚಿತ ಆತ್ಮಷಟ್ಕ (ನಿರ್ವಾಣ ಷಟ್ಕ)

ಕನ್ನಡಕ್ಕೆ  : ವಿಶ್ವೇಶ್ವರ ದೀಕ್ಷಿತ

 

ಬೆನಕ ನಮನ

ಗಣೇಶ, ಡೊಂಕು ಕೊಂಬಿನ, ಡೊಳ್ಳು ಹೊಟ್ಟೆಯ, ದೊಡ್ಡ ಮೈಯ, ಒಂದೆ ಕೋರೆಯ, ಇಲಿ ವಾಹನದ, ಬೆನಕ, ಎಲ್ಲರಿಗೂ ಆಯಸ್ಸು ಆರೋಗ್ಯಗಳನ್ನು ನೀಡು; ಸದ್ಬುದ್ಧಿಯನ್ನು  ಕೊಡು; ಅವರ ಪ್ರಯತ್ನಗಳಿಗೆ ಬರುವ ಎಡರುಗಳನ್ನು ಅಳಿಸು;
ಯಶಸ್ಸು ಅವರದಾಗಲಿ. ಎಲ್ಲ ಜನ ಜೀವಿ, ಜೀವ ಜಂತು, ಜೀವಾತ್ಮರುಗಳಿಗೆ ಶಾಂತಿ ಸುಖ ದೊರಕಲಿ. ಎಲ್ಲರಿಗೂ  ಒಳ್ಳೆಯದಾಗಲಿ;
ಮಾನವ್ಯ ಬೆಳೆಯಲಿ; ಮಾನವೀಯತೆ ಬೆಳಗಲಿ!

ಈಗ ಶ್ರೀ ಶಂಕರ ಭಗವತ್ಪಾದರ ಮಾತಿನಲ್ಲಿ[*] ಬೆನಕನಿಗೆ ನಮಿಸೋಣ